Posts

ನಿರೀಕ್ಷೆಗಳು

ಅಂತ್ಯವೆಂದುಕೊಂಡದ್ದು ಆರಂಭವಾದಾಗ ಹುಟ್ಟುವವು ಹೊಸ ನಿರೀಕ್ಷೆಗಳು ಕಡಲ ತೀರಕೆ ತೆರೆ ಅಪ್ಪಳಿಸುವಂತೆ ಪ್ರತಿ ಬಾರಿಯೂ ಹೊಸ ನಿರೀಕ್ಷೆಯೊಂದಿಗೆ ಎಲ್ಲೆಲ್ಲೂ ನಿರೀಕ್ಷೆಗಳು ಎಲ್ಲರಲ್ಲಿಯೂ ನಿರೀಕ್ಷೆಗಳು ನಮ್ಮಲ್ಲೂ ನಿರೀಕ್ಷೆಗಳು ನಮ್ಮವರಲ್ಲೂ ನಿರೀಕ್ಷೆಗಳು ಒಂದರ ಸಾವು ಅದರ ಬೆನ್ನಲ್ಲೆ ಹುಟ್ಟು ಅಂತ್ಯವೆಂಬುದೆ ರೋಚಕ ಆರಂಭ ಎಲ್ಲಿಯೂ ಹೊಸತನವೆಂಬುದು ಮಾತ್ರವಿಲ್ಲ ಕೆಲವರ ನಿರೀಕ್ಷೆಗಳಿಗೆ ಸಂತನ ಮುಖವಾಡ ಇನ್ನು ಕೆಲವರ ನಿರೀಕ್ಷೆಗಳು ದಬ್ಬಾಳಿಕೆಯ ಆಗರ ಹೇಗಿದ್ದರೂ ಪರಿಣಾಮ ಮಾತ್ರ ನಿಶ್ಚಿತ ಕಣ್ಣೀರು ಇಲ್ಲವೇ ಆನಂದಭಾಷ್ಪ ಕೆಲವರು ನಿರೀಕ್ಷೆಗಳೊಂದಿಗೆ ಬದುಕಿ ಸತ್ತರು ಹಲವರು ನಿರೀಕ್ಷೆಗಳೊಂದಿಗೆ ಬದುಕಿಯೂ ಸತ್ತರು ಪ್ರತಿ ಬಾರಿ ಪುನಶ್ಚೇತನ ಹೊಸ ನಿರೀಕ್ಷೆಯ ಹುಟ್ಟಿನೊಂದಿಗೆ ಎಲ್ಲಿಯವರೆಗೆ..... ಆರಂಭ ಎಂದುಕೊಂಡದ್ದು ಅಂತ್ಯವೆಂದೆನಿಸುವವರೆಗೆ

ಆ ಕ್ಷಣ

ಆ ಕಣ್ಣುಗಳಿಂದ ಹೊರಟ ಸುರೆಯು ನೇರ ಮನದೊಳಿಳಿದೊಡೆ ದೇಹದೊಳೆಲ್ಲ ಸಣ್ಣ ನಡುಕವೇರಿ ಇಹಪರವನೆಲ್ಲ ಮರೆಸಿ ಬಾನುಭುವಿಗಳೊಂದಾಗಿ ಕೈಗೆ ಕೈ ಸೇರಿಸಿ ತಮ್ಮೆಡೆಗೆ ಬರಸೆಳೆದು ತೇಲಿಸಿ ಇಗೋ ಕಾಣು ಇಲ್ಲೊಂದು ನೀನರಿಯದ ಅತಿ ಮೋಹಕ ಪ್ರಪಂಚವುಂಟು ಎಂದಾಗ..... ಕೈ ಚಿವುಟಿಕೊಂಡು ನಾನೆಂದೆ ಹೇ ಮರುಳು ಮನವೇ! ನೀನೆಲ್ಲಿರುವೆ ?!!

ನಿರ್ಲಿಪ್ತ

ಹಸಿರೆಲೆಯೊಂದು ಸಾಗುತಿದೆ ಮುಳುಗುತೇಳುತ ನದಿಯಲಿ ಎತ್ತಣಪಯಣವೆಂಬುದನರಿಯದೆ ಅಲೆಯೊಡನೆ ಅಲೆಯಾಗಿ ಶಿಲೆಯೊಡನೆ ಶಿಲೆಯಾಗಿ ಕಸದೊಡನೆ ಕಸವಾಗಿ ನೇಸರನೊಡನೆ ರಂಗಾಗಿ ದಿಕ್ಕು ದೆಸೆಯಿಲ್ಲ ದಾರಿಗೊಂದು ಗುರಿಯಿಲ್ಲ ಸಾಗುವ ಹಠವಿಲ್ಲ ನಿಲ್ಲುವ ಆಸೆಯೂ ಇಲ್ಲ ಸವೆದ ಹಾದಿಯಲಿ ಹೆಜ್ಜೆಯ ಗುರುತೂ ಇಲ್ಲ ಯಾರು ಬಲ್ಲರು ಯಾವ ಮರದ ಹೆಮ್ಮೆಯಾಗಿತ್ತೆಂದು ಯಾರು ಸೆಳೆದು ಬಿಟ್ಟರೆಂದು ಎಷ್ಟು ದಿನದ ಪಯಣವೆಂದು ಸಾಗುತಲೇ ಇದೆ ನೀರಿನೊಡನೆ ತಡೆಯುವರೆಂಬ ಭಯವಿಲ್ಲ ತಡೆದರೂ ಬೇಸರವಿಲ್ಲ ಬಳುಕುತ ಈಜುವ ಬಗೆ ಮಾತ್ರ ಗೊತ್ತು ಅದುವೆ ನಿರ್ಲಿಪ್ತ ಪ್ರಯಾಣಿಕ!

ಮೌನದ ಮಾತು

" ಮೌನ " ಎಂದೊಡನೆ ನೆನಪಾಗುವುದು , ಶಾಲಾ ದಿನಗಳಲ್ಲಿ ಯಾರಾದರು ದೇಶದ ನೇತಾರರು ಭೂಲೋಕ ತ್ಯಜಿಸಿದಾಗ , ಅದರ ಶೋಕಾಚರಣೆ ಪ್ರಯುಕ್ತ ( ಶಾಲೆಗೆ ರಜೆ ಎಂಬ ಖುಶಿಯೊಡನೆ !) ಆಚರಿಸುವ ಮೌನಾಚರಣೆ . ಒಂದು ನಿಮಿಷ ಇಡೀ ಶಾಲೆಯ ಮಕ್ಕಳು ಸದ್ದಿಲ್ಲದೆ ಮೌನ ಆಚರಿಸುವಾಗ ಆವರಿಸುವ ನಿಶ್ಯಬ್ದ , ಅಸಹಜ , ಕೃತಕವೆನಿಸಿ ನಗು ಉಕ್ಕಿ ಬರುತಿತ್ತು . ಆಚೀಚೆ ಕಣ್ಣು ಹಾಯಿಸುತ್ತಾ ನಗೆ ತಡೆದು ತಡೆದೂ ಸಾಕಾಗಿ ಕಡೆಗೊಂದು ಸಾರಿ ( ಒಂದು ನಿಮಿಷವಾಗುವ ಮೊದಲೆ !) " ಫುಕ್ " ಎಂದು ನಕ್ಕು ಬಿಟ್ಟು ಟೀಚರರ ಕೆಂಗಣ್ಣಿಗೆ ಗುರಿಯಾದದ್ದಿದೆ . ಗೆಳತಿಯರೊಡನೆ ಜಗಳವಾದಾಗ , ಟೀಚರುಗಳು ಬೈಯುವಾಗ , ಅಪರಿಚಿತರು ಮನೆಗೆ ಬಂದಾಗ .. ಇತ್ಯಾದಿ ಸಂದರ್ಭಗಳಲ್ಲಿ ಮೌನಕ್ಕೇ ಶರಣು . ಚಿಕ್ಕವಳಿರುವಾಗ ಅಮ್ಮ ಸಣ್ಣ ಪುಟ್ಟ ವಿಷಯಗಳಿಗೂ ಬೈಯುವಾಗ ನಾನು ಯಾವುದಕ್ಕೂ ಉತ್ತರವೇ ನೀಡದೆ ಮಾತು ಮರೆತಂತೆ ಮೌನವಹಿಸುವಾಗ ಅಮ್ಮನಿಗೆ ಸೋತ ಭಾವ ಆವರಿಸಿ ಮೈಯೆಲ್ಲ ಪರಚಿಕೊಳ್ಳುವಂತಾಗುತಿತ್ತು . ಹೀಗೆ ಮೌನವೂ ಒಂದೊದು ಸಾರಿ ಅಸ್ತ್ರದಂತೆ ಉಪಯೋಗವಾಗುವುದಿದೆ ( ನನಗೆ !). ಹಾಗೆಯೇ ಮಾತಾಡುವ ಸಂದರ್ಭದಲ್ಲಿ ಮಾತಾಡದೆ ಮೌನವಹಿಸಿ ಸೋತದ್ದೂ ಇದೆ , ಕಳೆದುಕೊಂಡದ್ದೂ ಇದೆ !! ಮೌನ ಕೆಲವೊಂದು ಬಾರಿ ಅಸಹನೀಯ , ಕೆಲವೊಮ್ಮೆ ಸುಂದ...

ಹೀಗೊಂದು ಕಥೆ

ಒಂದೂರಿನಲ್ಲಿ ಒಂದು ಪುಟ್ಟ ಹುಡುಗಿ ಇದ್ದಳು. ಅವಳ ಹತ್ತಿರ ಅವಳಷ್ಟೇ ಪುಟ್ಟದಾದ ಒಂದು ಗೊಂಬೆ ಇತ್ತು. ಆ ಗೊಂಬೆ ಎಂದರೆ ಅವಳಿಗೆ ಪಂಚಪ್ರಾಣ.ಅದನ್ನು ಬಿಟ್ಟಿರಲಾರದಷ್ಟು ಪ್ರೀತಿ.ತಿನ್ನುವಾಗ, ಮಲಗುವಾಗ ಆಡಲು ಎಲ್ಲದಕ್ಕೂ ಅವಳಿಗೆ ಆ ಗೊಂಬೆ ಬೇಕೇ ಬೇಕು.ಎಲ್ಲೇ ಹೋದರು ಅದನ್ನು ತನ್ನ ಸಂಗಡ ಕರೆದೊಯ್ಯುತ್ತಿದ್ದಳು. ಹೀಗೆ ಒಮ್ಮೆ ಅಜ್ಜನ ಮನೆಗೆ ಹೋದಾಗ ಯಾರೋ ಆ ಗೊಂಬೆಯನ್ನು ಕದ್ದುಬಿಟ್ಟರು.ಹುಡುಗಿಯ ಸಂಕಟ ಹೇಳತೀರದು.ಯಾರು ಎಷ್ಟು ಸಮಾಧಾನಿಸಿದರೂ ಆ ಹುಡುಗಿ ತನಗೆ ಅದೇ ಗೊಂಬೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಳು. ದಿನಗಟ್ಟಳೆ ಅದನ್ನೆ ನೆನೆಯುತ್ತಾ ದುಖಃ ಸಾಗರದಲ್ಲಿ ಮುಳುಗಿದಳು..ಅವಳ ತಂದೆ ಒಂದಲ್ಲ ಎರಡಲ್ಲ ನಾಲ್ಕು ಗೊಂಬೆಗಳನ್ನು ತಂದು ಕೊಟ್ಟರೂ ಹುಡುಗಿಗೆ ತೃಪ್ತಿಯಾಗಲಿಲ್ಲ. ದಿನಗಳು ಕಳೆದರೂ ಹುಡುಗಿಗೆ ಅದರ ನೆನಪು ಮಾಸಲಿಲ್ಲ. ಹಾಗೆಯೆ ಪರಿಸ್ಥಿತಿಗೆ ಹೊಂದುಕೊಂಡಳು. ಆದರೂ ಮನದಲ್ಲಿ ಆ ಗೊಂಬೆಯನ್ನು ಕಳೆದುಕೊಂಡ ವೇದನೆ ಉಳಿದುಕೊಂಡಿತ್ತು.ಮೊದಲಿನ ಉತ್ಸಾಹ ಮಾಯವಾಗಿತ್ತು.ಒಮ್ಮೊಮ್ಮೆ ಅದರ ನೆನಪು ಉಕ್ಕಿ ಬಂದು ಅಳುತ್ತಾ ಕುಳಿತು ಬಿಡುವಳು. ಹೀಗೆ ಒಂದು ವರ್ಷ ಕಳೆಯಿತು. ಅಚ್ಚರಿಯೆಂಬಂತೆ ಆ ಗೊಂಬೆ ಅವಳ ತಂದೆಗೆ ಮರಳಿ ಸಿಕ್ಕಿತು.ಅವರು ಅತೀವ ಆನಂದದಿಂದ ಮಗಳಿಗೆ ತಂದುಕೊಟ್ಟರು.ಆಗ ಆ ಹುಡುಗಿಯ ಸಂತಸ ಹೇಳತೀರದು.ಆ ಗೊಂಬೆ ಈಗ ಮೊದಲಿನಂತಿರದೆ ಬಣ್ಣ ಮಾಸಿತ್ತು. ಅಲಲ್ಲಿ ಹರಿದಿತ್ತು. ಆದರೂ ಹುಡುಗಿಗೆ ಗೊಂಬೆ ಸಿಕ್ಕ ಸಂತೋಷದಲ್ಲಿ ಅದ್ಯಾವುದೂ...

ಪರಿಧಿಯ ಅಂಚಿನಲ್ಲಿ

ತುಂಬಿದ ಹೃದಯಕೆ ಹರಿಸಲು ಬೇಕಿದೆ ಒಂದು ದಾರಿ ಕ್ಷೀಣ ಸ್ವರದಿಂದ ತೇಲಿ ಬಂತೊಂದು ಅಸ್ಪಷ್ಟ ಕರೆ ನನ್ನೊಳಗಿನ ಪ್ರಪಂಚದಲ್ಲೆ ನಾನು ಹಲವರಿಗೆ ನನ್ನೊಳಗೆ ನಾನಿಲ್ಲದಿರುವ ಅರಿವು ಏನಾಗುತಿದೆ...... ಬಿಸಿಯುಸಿರೊಂದು ಜೊತೆಯಾಗಿ ಸದಾ ಬೆಂಬಿಡದೆ ಕಾಡುವಾಗ ಕಣ್ಣಂಚಲಿ ಮೂಡುವ ನಗೆಯನು ಮರೆಮಾಚುವ ಮುನ್ನ ನಾನಾರೆಂಬುವ ಪ್ರಶ್ನೆ ಕಾಮನಬಿಲ್ಲಿಗೆ ಕೊಡೆಯೇ ಅಡ್ಡ ಬದುಕಿನಲ್ಲಿ ಭ್ರಮೆಗಳೊ ಬದುಕೇ ಭ್ರಮೆಯೋ ಎಂದರಸುವ ಆತುರದಲ್ಲಿ ಕೂಡಿ ಕಳೆವ ಲೆಕ್ಕಾಚಾರದಲ್ಲಿ ನಮ್ಮನ್ನೇ ಇಂಚಿಂಚಾಗಿ ಕೆಳೆದುಕೊಳ್ಳುವಾಗ ಅಚ್ಚರಿ ಎನಾಗುತ್ತಿದೆಯೆಂದು ನಿರ್ವಾತದಲಿ ರೆಕ್ಕೆ ಪುಕ್ಕ! ಅವರಿವರಿಂದ ನಾವು ನಮ್ಮಿಂದ ಮಗದೊಬ್ಬರು ವರ್ತುಲದೊಳಗೊಂದು ವರ್ತುಲ ಅದಕೊಂದು ಹೆಸರು ಪರಿಧಿಯಲ್ಲಿ ನಿಂತ ಹೆಜ್ಜೆ ಆದರೂ ಮನದಲ್ಲಿ ಹರುಷ ದಿಗಂತದಾಚೆಗಿನ ಪ್ರಪಂಚ ಎಂದೆಂದೂ ಸುಂದರ.

ಬಪ್ಪ್ರ್ಯಲ್ಲಾ ಕುಂದಾಪ್ರಕ್ಕೆ!

( ಧಾರವಾಡದ ಹೋಗ್ರಿ , ಬರ್ರಿ , ಮೈಸೂರು ಸೀಮೆಯ ಹೋಗಿ , ಬನ್ನಿ ಎಂಬುದು ನಾನು ಬಾಲ್ಯದಿನ್ದಲೂ ಕೇಳಿ ಕಲಿತ ಭಾಷೆ . ಆದರೆ ಕುಂದಾಪುರದ ( ಕುಂದಾಪ್ರ !) ಹೋಯ್ಕ , ಬರ್ಕ ಮಾತ್ರ ತೀರಾ ಅಪರಿಚಿತವಾಗಿತ್ತು . ಮೊದಮೊದಲಿಗೆ ಇದು ಕನ್ನಡವೇನಾ ಎಂಬಷ್ಟು ಗೊಂದಲ . ಈ ಭಾಷೆಗೆ , ಅದರ ವೇಗಕ್ಕೆ ಹೊಂದಿಕೊಂಡು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ ( ಮಾತಾಡುವುದಂತೂ ದೂರದ ಮಾತು !!) ಭರ್ತಿ ಎರಡು ವರ್ಷ ಬೇಕಾಯ್ತು ! ನೋಡಿ ಈಗ ಆ ಭಾಷೆಯಲ್ಲಿ ಬರೆಯುತ್ತಿದ್ದೇನೆ ( ಪ್ರಯತ್ನಿಸುತ್ತಿದ್ದೇನೆ ಎಂಬುದೇ ಸರಿ !!) ಅಂದರೆ ನನಗೆ ( ನಾನೆ !!) ಶಹಬ್ಬಾಸ್ ಹೇಳಲೇಬೇಕು !! ನಮ್ಮೂರಿನ ಹಿರಿಯರೊಬ್ಬರು ಬಹಳ ದಿನಗಳ ನಂತರ ಕಂಡಾಗ ನನ್ನನ್ನು ಮಾತಿಗೆಳೆದದ್ದು ಹೀಗೆ .) ಹ್ವಾಯ್ ಹೇಂಗಿದ್ರಿ ? ಎಂಥ ಕಾಂಬುಕಿಲ್ಲೆ ?...... ಅಮ್ಮನ್ ಮನೀಗ್ ಹೋಯಿರ್ಯಾ ?... ಇಲ್ಯಾ ? ಮತ್ತೆ ?.... ಹೌದಾ . ಮಕ್ಕಳ ಎಂಥ ಮಾಡ್ತೊ ? ಹಿರಿಯಂವ ಶಾಲೆಗ್ ಹೋತ್ನಲ್ದ ? ಕಿರ್ದ್ ? ಎರಡ್ ವರ್ಶ ಆಯ್ತಾ ?..... ಮಸ್ತ್ ಮಾತಾಡ್ತ್ಲ್ ಅಂಬ್ರಲಾ ?.... ದೊಡ್ ಮಗ ಈಗ ಹುಷಾರಾಗಿದ್ನಾ ? ಸಣ್ಕಿಪ್ಪತ್ತಿಗೆ ಅಂವಂಗೆ ಹುಷಾರಿರ್ತೇ ಇರ್ಲಿಲ್ಲಲ್ಲಾ . ಈಗ ಅಡ್ಡಿ ಇಲ್ಯಾ ?....... ಈಗ ಅದೆಂಥದೊ ಹಂದಿಜ್ವರ ಅಂಬ್ರಲಾ ! ಎಲ್ಲ ಕಡಿಗೂ ಇತ್ತಂಬ್ರಲಾ ! ಎಶ್ಟ್ ಜನ ಸತ್ ಹೋಯಿರಂಬ್ರಲಾ ಅಲ್...