Posts

Showing posts from August, 2009

ಬಪ್ಪ್ರ್ಯಲ್ಲಾ ಕುಂದಾಪ್ರಕ್ಕೆ!

( ಧಾರವಾಡದ ಹೋಗ್ರಿ , ಬರ್ರಿ , ಮೈಸೂರು ಸೀಮೆಯ ಹೋಗಿ , ಬನ್ನಿ ಎಂಬುದು ನಾನು ಬಾಲ್ಯದಿನ್ದಲೂ ಕೇಳಿ ಕಲಿತ ಭಾಷೆ . ಆದರೆ ಕುಂದಾಪುರದ ( ಕುಂದಾಪ್ರ !) ಹೋಯ್ಕ , ಬರ್ಕ ಮಾತ್ರ ತೀರಾ ಅಪರಿಚಿತವಾಗಿತ್ತು . ಮೊದಮೊದಲಿಗೆ ಇದು ಕನ್ನಡವೇನಾ ಎಂಬಷ್ಟು ಗೊಂದಲ . ಈ ಭಾಷೆಗೆ , ಅದರ ವೇಗಕ್ಕೆ ಹೊಂದಿಕೊಂಡು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ ( ಮಾತಾಡುವುದಂತೂ ದೂರದ ಮಾತು !!) ಭರ್ತಿ ಎರಡು ವರ್ಷ ಬೇಕಾಯ್ತು ! ನೋಡಿ ಈಗ ಆ ಭಾಷೆಯಲ್ಲಿ ಬರೆಯುತ್ತಿದ್ದೇನೆ ( ಪ್ರಯತ್ನಿಸುತ್ತಿದ್ದೇನೆ ಎಂಬುದೇ ಸರಿ !!) ಅಂದರೆ ನನಗೆ ( ನಾನೆ !!) ಶಹಬ್ಬಾಸ್ ಹೇಳಲೇಬೇಕು !! ನಮ್ಮೂರಿನ ಹಿರಿಯರೊಬ್ಬರು ಬಹಳ ದಿನಗಳ ನಂತರ ಕಂಡಾಗ ನನ್ನನ್ನು ಮಾತಿಗೆಳೆದದ್ದು ಹೀಗೆ .) ಹ್ವಾಯ್ ಹೇಂಗಿದ್ರಿ ? ಎಂಥ ಕಾಂಬುಕಿಲ್ಲೆ ?...... ಅಮ್ಮನ್ ಮನೀಗ್ ಹೋಯಿರ್ಯಾ ?... ಇಲ್ಯಾ ? ಮತ್ತೆ ?.... ಹೌದಾ . ಮಕ್ಕಳ ಎಂಥ ಮಾಡ್ತೊ ? ಹಿರಿಯಂವ ಶಾಲೆಗ್ ಹೋತ್ನಲ್ದ ? ಕಿರ್ದ್ ? ಎರಡ್ ವರ್ಶ ಆಯ್ತಾ ?..... ಮಸ್ತ್ ಮಾತಾಡ್ತ್ಲ್ ಅಂಬ್ರಲಾ ?.... ದೊಡ್ ಮಗ ಈಗ ಹುಷಾರಾಗಿದ್ನಾ ? ಸಣ್ಕಿಪ್ಪತ್ತಿಗೆ ಅಂವಂಗೆ ಹುಷಾರಿರ್ತೇ ಇರ್ಲಿಲ್ಲಲ್ಲಾ . ಈಗ ಅಡ್ಡಿ ಇಲ್ಯಾ ?....... ಈಗ ಅದೆಂಥದೊ ಹಂದಿಜ್ವರ ಅಂಬ್ರಲಾ ! ಎಲ್ಲ ಕಡಿಗೂ ಇತ್ತಂಬ್ರಲಾ ! ಎಶ್ಟ್ ಜನ ಸತ್ ಹೋಯಿರಂಬ್ರಲಾ ಅಲ್

ಅವಳ ಧ್ವನಿ

ಮಾನವ ಮೂಳೆ ಮಾಂಸದ ತಡಿಕೆ ಎಂದು ಹೇಳುವವರು ಹೇಳಲಿಲ್ಲವೇಕೆ ಅದರೊಲ್ಲೊಂದು ಮನಸುಂಟೆಂದು. ಅದನಾವರಿಸಿಹುದು ಸ್ವಾರ್ಥ ಮೋಹ ಮತ್ಸರಗಳೆಂಬ ಭಾವಗಳು ಅದು ಸೋಲುವುದು ಪ್ರೀತಿ ಸ್ನೇಹ ಆಸೆಗಳೆದಿರೆಂದು! ಅರಿವಿರಲಿ ಇನಿಯ ಇದಕೆ ನಾನು ಹೊರತಲ್ಲ ವೆಂದು ಬೇಡ ನನಗೆ ನೀ ನೀಡುವ ಎತ್ತರದ ಸ್ಥಾನ ಇರಬಯಸುವೆ ನಿನ್ನ ಪಕ್ಕದಲ್ಲಿಯೇ ಏಕೆಂದರೆ..... ದೇವತೆಯಲ್ಲ ನಾ ಬರಿ.... ಬರೀ ಮನುಷ್ಯಳು!

ಅಮ್ಮ

ಯಾವುದೋ ವಾತ್ಸಲ್ಯದ ಮಡಿಲಲ್ಲಿ ಹುಟ್ಟಿ ಬೆಳೆದು ಎಲ್ಲರನ್ನೂ ತೊರೆದು ಎಲ್ಲೋ ಬಂದು ಸೇರಿದಾಗ ಅಮ್ಮಾ ನೀ ಅರಿವಾದೆ ದುಗುಡ ನೋವುಗಳೆಲ್ಲ ಹೃದಯದೊಳು ಹೆಪ್ಪುಗಟ್ಟಿ ನಿಂತಾಗ ಆ ಮಮತೆಯ ಸ್ವರ ಕಿವಿಯ ತಲುಪಿದೊಡನೆ ಕರಗಿ ನೀರಾಗಿ ಹರಿವಾಗ ಅಮ್ಮಾ ನೀ ಅರಿವಾದೆ ಬರಿದಾದ ಮಡಿಲನ್ನು ಮುದ್ದಾದ ಪುಟ್ಟ ಜೀವವೊಂದು ತುಂಬಿ ಪ್ರಪಂಚವೇ ತಾನಾದಾಗ ಅಮ್ಮಾ ನೀ ಅರಿವಾದೆ ಕರುಳಕುಡಿ ಮಿಡಿ ಹಲ್ಲು ತೋರಿಸಿ ನಕ್ಕಾಗ ಜಗತ್ತನ್ನೇ ಗೆದ್ದ ಸಂಭ್ರಮದಿಂದ ಅದನ್ನು ಬಾಚಿ ತಬ್ಬುವಾಗ ಅಮ್ಮಾ ನೀ ಅರಿವಾದೆ ಸಹನೆಯೇ ಮೈವೆತ್ತಂತೆ ಎಲ್ಲವನ್ನು ನುಂಗಿಕೊಂಡು ಮೌನವಾಗಿ ಹರಿವ ಕಣ್ಣೀರನ್ನು ಪುಟಾಣಿ ಕೈಯೊಂದು ಅಕ್ಕರೆಯಿಂದ ಒರೆಸುವಾಗ ಅಮ್ಮಾ ನೀ ಅರಿವಾದೆ .