ಏಕೆ ?



ಮಂಜಿನರಮನೆಯ ಕಟ್ಟಿ ಅದರಂದ ಸವಿಯುವಾಗ
ಸೂರ್ಯನೆದ್ದು ಬಂದನಲ್ಲ !
ಮಳೆ
ನೀರ ಮೇಲೆ ಕಾಗದದ ದೋಣಿ ತೇಲಿಸುವಾಗ
ನೀರೆ
ಇಂಗಿ ಹೋಯಿತಲ್ಲ!
ತೀರದ
ಮರಳು ರಾಶಿಯಲಿ ಹೆಸರ ಕೊರೆದು ಬೀಗುವಾಗ ಸಾಗರದಲೆ ಚಿಮ್ಮಿ ಬಂದಿತಲ್ಲ!
ಅಂಗೈಯಲ್ಲಿರುವ
ಸ್ಫಟಿಕ ಸಿಕ್ಕಿತು ಎನ್ನುವಾಗಲೇ
ಕೈಜಾರಿ ಹೋಯಿತಲ್ಲ !

Comments

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!