Posts

Showing posts from June, 2009

ಏಕೆ ?

Image
ಮಂಜಿನರಮನೆಯ ಕಟ್ಟಿ ಅದರಂದ ಸವಿಯುವಾಗ ಸೂರ್ಯನೆದ್ದು ಬಂದನಲ್ಲ ! ಮಳೆ ನೀರ ಮೇಲೆ ಕಾಗದದ ದೋಣಿ ತೇಲಿಸುವಾಗ ನೀರೆ ಇಂಗಿ ಹೋಯಿತಲ್ಲ! ತೀರದ ಮರಳು ರಾಶಿಯಲಿ ಹೆಸರ ಕೊರೆದು ಬೀಗುವಾಗ ಸಾಗರದಲೆ ಚಿಮ್ಮಿ ಬಂದಿತಲ್ಲ! ಅಂಗೈಯಲ್ಲಿರುವ ಸ್ಫಟಿಕ ಸಿಕ್ಕಿತು ಎನ್ನುವಾಗ ಲೇ ಕೈಜಾರಿ ಹೋಯಿತಲ್ಲ !

ನಾನು

ಒಮ್ಮೊಮ್ಮೆ ನನಗೆ ಎಲ್ಲ ಯೋಚನೆಗಳು ಒಟ್ಟಿಗೆ ದಾಳಿ ಮಾಡುತ್ತವೆ. ಆಗ ನಾನು ನಾನಾಗಿರುವುದಿಲ್ಲ. ಎಲ್ಲೆಲ್ಲೊ ವಿಹರಿಸ್ತಾ ಇರ್ತೀನಿ. ಒಮ್ಮೆ ಕಲ್ಪನಾ ಲೋಕಕ್ಕೆ ಬಂದಿಳಿದರೆ ಅಲ್ಲಿಯೇ ಒಂದು ಸಾಮ್ರಾಜ್ಯವನ್ನೇ ಕಟ್ಟಿ ಬಿಡುತ್ತೇನೆ. ಚಿಕ್ಕವಳಿರುವಾಗ ಅಪ್ಪ ಹೇಳುತ್ತಿದ್ದ fantacy ಕಥೆಗಳನ್ನು ಕೇಳಿ ಕೇಳಿ ಕಲ್ಪನಾ ಸಾಮ್ರಾಜ್ಯವನ್ನು ಹೇಗೆ ಆಳುವುದು ಹಾಗು ಹೇಗೆ ವಿಸ್ತರಿಸುವುದು ಎಂಬುದನ್ನೂ ಕಲಿತುಕೊಂಡು ಬಿಟ್ಟಿದ್ದೀನಿ.ಹೀಗೆ ಯೋಚನೆಗಳು ಸಾಗಿ ಸಾಗಿ ಅಲ್ಲಿಯೇ ಒಂದು ಆಶಾಗೋಪುರ ಕಟ್ಟಿ ಅದರ ಮೇಲೇರಿ ಏರಿ ಏರಿ ಸಾಗುತ್ತಿರುವಾಗ ಸತ್ಯವೆಂಬುದು ಧುತ್ತೆಂದು ಕಣ್ಣ ಮುಂದೆ ಪ್ರತ್ಯಕ್ಷವಾಗಿ 'ನನ್ನನ್ನು ಒಪ್ಪಿಕೊ' ಎಂದು ಗೇಲಿ ಮಾಡಿ ನಕ್ಕಾಗ ಎಲ್ಲಿ ನಿಂತಿದ್ದೆನೋ ಅಲ್ಲಿಂದಲೇ ಧೊಪ್ಪೆಂದು ಕೆಳಗೆ ಬಿದ್ದು........ವಾಸ್ತವಕ್ಕೆ ಹೊಂದಿಕೊಳ್ಳಲೇ ಕಷ್ಟವಾಗಿ ಬಿಡತ್ತೆ. ಒಮ್ಮೊಮ್ಮೆ ಅನಿಸುವುದುಂಟು ನಾನು ಚಿಂತೆ ಎಂಬುದಕ್ಕೆ 'ವಿಚಾರ'ಎಂಬ ದೊಡ್ಡ ಹೆಸರು ಇಟ್ಟುಬಿಟ್ಟಿದ್ದಿನಿ ಅಂತ.ಈ ಭಾವನಜೀವಿಗಳ ಹಣೆಬರಹವೇ ಇಷ್ಟು ಅಂತ ಕಾಣುತ್ತೆ. ಭಾವನೆಗಳೇ ನಮ್ಮನ್ನು ಆಳುತ್ತವೆ. ಎಲ್ಲರ ಜೀವನದಲ್ಲೂ ಏಳು,ಬೀಳು,ಕಷ್ಟ ಸುಖ ಎಲ್ಲವೂ ಇದ್ದರೂ ಅದು ನಮ್ಮ ಸ್ವಂತ ಅನುಭವಕ್ಕೆ ಬಂದಾಗ ಅದು ಹೊಸದೇ. ಆಸೆಗಳಿಗೆ ಮಿತಿ ಇಲ್ಲ, ನಿರಾಶೆಗಳೂ ಕಡಿಮೆ ಇಲ್ಲ.

ಪಮ್ಮಿಗೊಂದು ಪತ್ರ

ಹಾಯ್ ಪಮ್ಮಿ, ನೋಡು, ಬ್ಲಾಗ್ನಲ್ಲಿ ನಿಂಗೆ ಪತ್ರ ಬರಿತ ಇದೀನಿ. ಕಾರ್ಡಿನಿಂದ ಶುರು ಆಗಿ ಈಗ ಬ್ಲಾಗಿಗೆ ಬಂದಿದೆ. ಅಷ್ಟರವರೆಗೂ ಉಳಿಸಿಕೊಂಡು ಬಂದಿದಿವಲ್ಲ ಸದ್ಯ . ಮೊನ್ನೆ ನಿನ್ನ ಮನೆಗೆ ಬಂದಾಗ ಯಾಕೋ ಮನಸ್ಸು ಸರಿ ಇರಲಿಲ್ಲ. ಗೊತ್ತಲ್ಲ ನಿಂಗೆ. ಆದ್ರೆ ನಿನ್ ಜೊತೆ ಮಲ್ಪೆ ಬೀಚಿಗೆ ಹೋಗಿ ಬಂದ್ಮೇಲೆ ಒಂದ್ ಸರ್ತಿ ಫ್ರೆಶ್ ಆಯ್ತು ನೋಡು. ಅದರಲ್ಲೂ ಗಾಡಿಯಲ್ಲಿ ಹೋಗಿದ್ದು ಮತ್ತು ಮಜಾ ಬಂತು. ಸದ್ಯ ನನ್ನನ್ನು ಸೇಫಾಗಿ ಕರ್ಕೊಂಡು ಬಂದ್ಯಲ್ಲ !! ಒಂದ್ ಮಾತಂತೂ ಹೇಳ್ಬೇಕು. ನಿಂದು ಭಾವಂದು ಜೋಡಿ "ಮೇಡ್ ಫಾರ್ ಈಚ್ ಅದರ್ " .ಎಷ್ಟು ಖುಷಿಯಾಯ್ತು ಗೊತ್ತ ನಂಗೆ ನಿಮ್ಮಿಬ್ರನ್ನು ನೋಡಿ. ಇಷ್ಟು ದಿನ ನಾನು ಸರಿಯಾಗಿ ಅಬ್ಸರ್ವ್ ಮಾಡಿರಲಿಲ್ಲ. ಸಂಬಂಧದಲೆಲ್ಲು ಕೃತಕತೆಯ ಲೇಪವಿಲ್ಲ, ಅತಿಯಾದ ನಿರೀಕ್ಷೆಗಳು ಇಲ್ಲ, ಅಹಂನ ದೊಂಬರಾಟವಿಲ್ಲ.. ಹಹ.. ನಂಗೊತ್ತು ನಿನೆಂತಿಯ ಅಂತ. ಇನ್ನು ಜಾಸ್ತಿ ಕೊರೆಯೋಲ್ಲ ಬಿಡು.... ಮೊದಲು ಬರೆಯುತಿದ್ದ ಹಾಗೆ ಬರೀಬೇಕು ಅಂದ್ರೆ, ಪವನ ಕೊಡಿಸಿದ ಚುಡಿ ಹೊಲೆಯೋಕೆ ಕೊಟ್ರು ಇನ್ನು ಸಿಕ್ಕಿಲ್ಲ, ನಮ್ಮ ಬೆಳಗಾಂ ಪ್ರೊಗ್ರಾಮ್ ಕ್ಯಾನ್ಸಲ್ ಆಯ್ತು, ೫ ನೆ ತಾರೀಕು ಕರಣ್ ನಿಗೆ ಶಾಲೆ ಶುರು, ಅತ್ತೆಗೆ ಕಾಲು ನೋವು ಜಾಸ್ತಿ ಆಗಿದೆ, ಮಾವನಿಗೆ ಬೆನ್ನು ನೋವು ಹೆಚ್ಚಾಗಿದೆ, ನಂಗೆ ಕೆಮ್ಮು ಸ್ವಲ್ಪ ಕಮ್ಮಿಯಾಗಿದೆ... ಒಳ್ಳೆ ಡಾಕ್ಟರ ಪ್ರಿಸ್ಸಿಪ್ಶನ್ ಇದ್ದ ಹಾಗೆ ಇದ್ಯಲ್ಲ !!