Posts

Showing posts from May, 2009

ಆ ದಿನಗಳು

ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ ನೋಟವೊಂದೆ ಸಾಕು ದಿನವು ಬೆರೆಯಲೇ ಬೇಕು ಪ್ರೇಮಲೋಕದಾ ಗೀತೆ ಬರೆಯೋಣ ಬಾ ss [ಪ] ಬಾನಾಡಿ ಗೊಂದು ಸವಿಮಾತು ಕಲಿಸುವ ಆ ವೀಣೆಗೊಂದು ಎದೆರಾಗ ತಿಳಿಸುವ ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವಾ ಅರಳುತಿರೋ ಹೂಗಳಿಗೆ ಒಲವ ಸುಧೆ ಯಾ ಕೊಡುವ ಆವಾಗ ಬಾಳಿನಾ s ಅರ್ಥವೇ s ಪ್ರೇಮವೆಂಬುದಲವೆ s ಪ್ರೇಮವೇ ಇಲ್ಲದೆ ನಾನು ನೀನು ಯಾಕೆ ss [ ೧ ] <-following stanza composed by rohini -> ಆ ಮೋಡದಿಂದ ಮಳೆಹನಿಯು ಜಿನುಗುತಾ ಈ ಭೂಮಿಯಿಂದ ಅನುರಾಗ ಅರಳುತ ತಾರೆಯದು ಇಳಿಯುತಲಿ ಪ್ರೇಮವೆಂಬ ಕಿರಣ ಪಸರಿಸಿದೆ ಹೊಮ್ಮಿಸಿದೆ ಪ್ರೀತಿಯೆಂಬ ಕವನ ಆಕಾಶದಾಚೆಯಾ s ಲೋಕಕೇ s ಹಾರಿ ಹಾರಿ ಭ್ರಮಣ ಬಲ್ಲೆನು s ಅಲ್ಲಿಯೇ s ನನ್ನ ನಿನ್ನ ಮಿಲನಾ ss [ ೨ ]

ಮಂಥನ

ಅಂತು ಪವನನ ನಿಶ್ಚಿತಾರ್ಥ ಆಯಿತು. ಆದರು ಯಾಕೋ ಸಂತೋಷ ಅಂತ ಆಗ್ತಾ ಇಲ್ಲ. ಹುಡುಗಿ ನೋಡಿಕೊಂಡು ಬಂದ ದಿನವೇ ಪವನ ನನ್ನನ್ನು ಕೇಳಿದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಮನ ಗೊಂದಲದ ಗೂಡಾಗಿತ್ತು. ನನ್ನಿಂದ ಏನು ಉತ್ತರ ಬರದಾಗ ಅಮ್ಮನನ್ನು ಕೇಳಿದ. ಅವರು ಏನೋ ಹೇಳಿದರು, ಕಡೆಗೆ ತನ್ನ ನಿರ್ಧಾರ ಸಾರಿಬಿಟ್ಟ. ತಾನು ಅದೇ ಹುಡುಗಿಯನ್ನ ಮದ್ವೆ ಆಗ್ತೀನಿ ಅಂತ. ಕಡೆಗೆ ಅನ್ನಿಸಿತು ಹೌದು ಅ ಹುಡುಗಿ ಚೆನ್ನಾಗೆ ಇದ್ದಾಳಲ್ಲ,ಬೇಡ ಅನ್ನಲು ಯಾವ ಕಾರಣವೂ ಇರಲ್ಲಿಲ್ಲ. ನಾವೆಲ್ಲ ಸಮ್ಮತಿ ನೀಡಿದೆವು. ಮರುಕ್ಷಣವೇ ನನಗೇಕೋ ಬೇಜರಾಗಲು ಶುರುವಾಯ್ತು. ಪ್ರಸಾದ್ಗೆ ಹೇಳದೆ, 'ನಾನ್ಯಾಕೋ ಪವನನನ್ನು ಮಿಸ್ ಮಾಡಿಕೊಳ್ತಾ ಇದೀನಿ' ಅಂತ. ಅವರಂತೂ ನಕ್ಕುಬಿಟ್ಟರು,'ಯಾರತ್ರನಾದ್ರು ಹೀಗೆ ಹೇಳಿಬಿಟ್ಟೀಯಾ ಮತ್ತೆ, ತಮ್ಮನಿಗೆ ಮದ್ವೆ ಸೆಟ್ಟಾಯ್ತು ಅಂದ್ರೆ ಯಾರಾದ್ರೂ ಬೇಜಾರ್ ಮಡಿಕೊಳ್ತರಾ? ವಿಚಿತ್ರ ಮಾರಾಯ್ತಿ ' ಅಂತ.ನಂತರ ಏನೂ ಮಾತಾಡೋದಿಕ್ಕೆ ಹೋಗಲಿಲ್ಲ. ಅವರತ್ರ ಅಷ್ಟೆ ಅಲ್ಲ ಯಾರತ್ರನು. ನಾನೆಂದೂ ತಮ್ಮನಿಂದ ಏನೂ ನಿರೀಕ್ಷೆ ಮಾಡಲಿಲ್ಲ. ಕಷ್ಟ ,ಸುಖ ಹಂಚ್ಕೊಳ್ತಿದ್ದೆ ಅಷ್ಟೆ. ನನಗ್ಗೊತ್ತು, ಅವನಿಗೂ ಒಬ್ಬಳು ಆತ್ಮೀಯಳು ಬೇಕು, ಜೀವನ ಸಂಗಾತಿ ಬೇಕು ಅಂತ. ಈ ವಿವೇಚನೆ ಮೀರಿ ನಂಗೆ ಈ ತರಹ ಯೋಚಿಸೋದನ್ನ ತಡೆಯೋಕಗ್ತಿಲ್ಲ. ನಾನು ಬಹುಶ ಒಂಭತ್ತೋ ಅಥವ ಹತ್ತನೇ ಕ್ಲಾಸಲ್ಲಿದ್ದಾಗ ,ಶ್ರಿಧರಣ್ಣ ನನ್ನ ಜಾತಕ ನೋಡಿ ಹೇಳಿದ್ದ